ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಮನುಷ್ಯ ಜೀವಿಯ ಬೆಲೆ......... |
Thursday, November 19, 2009 |
ಎದೆ ಹೊತ್ತಿ ಉರಿಯುತ್ತಿದೆ
ಉಸಿರು ಬತ್ತಿ ಸಾಯುತ್ತಿದೆ
ಮನುಷ್ಯ ಮನುಷ್ಯ ರುಗಳ
ನಡುವೆ ಅರ್ಥ ಹುಡುಕಿ ಸುಸ್ತಾಗಿದ್ದೇನೆ.
ಏಕತೆಯ ಬೀಜ ಮಂತ್ರ
ಪಠಿಸುತ್ತಿದ್ದ ದೇಶದಲ್ಲೀಗ
ಮದ್ದು ಗುಂಡುಗಳು ಮಾತನಾಡುತ್ತಿವೆ.
ಸಾಹೋದರತೆಯಿಂದ ಭದ್ರವಾಗಿ
ಶಕ್ತಿ ಯುತವಾಗಿ ಬಲಪಡಿಸಬೇಕಾದ
ಕೈಗಳಲ್ಲೀಗ ಗನ್ನುಗಳು
ಬೆಂಕಿಯುಗುಳುತ್ತಿವೆ.
ಯಾರದೋ ಸ್ವಾರ್ಥಕ್ಕೆ
ಇನ್ಯಾರೋ ಬಲಿಯಾಗುತ್ತಿದ್ದಾರೆ.
ಕೌರ್ಯದ ಪರಮಾವಧಿ
ಮುಗಿಲು ಮುಟ್ಟಿದೆ.
ರಾಕ್ಷಸೀಯತೆ ವಿಜ್ರಂಭಿಸುತ್ತಿದೆ
ನೂರಾರು ಮುಗ್ಧ ಜನರ
ಹೆಣಗಳುರುಳುತ್ತಿವೆ.
ನೆತ್ತರ ಹೊಳೆ ಹರಿಯುತ್ತಿದೆ.
ದುಷ್ಟರ ಅಟ್ಟಹಾಸದೊಡನೆ
ಮಾನವೀಯತೆ ನಾಶವಾಗುತ್ತಿದೆ
ಮನುಷ್ಯ ಮನುಷ್ಯ ರ ನಡುವೆಯೇ
ಮನುಷ್ಯ ಜೀವಿಗಳ
ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ.
|
posted by ASHRAF @ 2:44 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|