ನೇರದಾರಿ

ಈ ಜೀವನ ಎಂಬ ಪ್ರಯಾಣದಲ್ಲಿ ನಾವು ಸಂಧಿಸುವ ವ್ಯಕ್ತಿಗಳು ಆಕಸ್ಮಿಕ,ಅಗಲಿಕೆ ಅನಿವಾರ್ಯ, ಹಾಗೆಯೇ ಅವರವರ ನಿಲ್ದಾಣ ಬಂದ ಕೂಡಲೇ ಇಳಿಯಲೇ ಬೇಕು.ಕೆಲವರು ದೀರ್ಘ ಪ್ರಯಾಣ ಮಾಡಬಹುದು.ಇನ್ನು ಕೆಲವರು ಸಮೀಪ ಪ್ರಯಾಣದಲ್ಲಿರಬಹುದು.ನಾವೀಗ ಈ ಪ್ರಯಾಣದ ಯಾವ ಸ್ಟೇಜ್ ನಲ್ಲಿದ್ದೇವೆಂದು ಬಲ್ಲವನು ಒಬ್ಬನೇ (ಅಲ್ಲಾಹ್)ಅವನೇ ನಮ್ಮೆಲ್ಲರ ಸರ್ವ ಪಾಲಕ.ಅವನಲ್ಲದೆ ಬೇರೆ ಆರಾಧ್ಯನಿಲ್ಲ.ಅಲ್ಲಾಹ್ ನಮ್ಮೆಲ್ಲರ ಕೊನೆಯ ಪಯಣವನ್ನು ಸುಗಮ ಗೊಳಿಸಿ, ನಮ್ಮೆಲ್ಲರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ

 
>
  • ಹದೀಸ್ ಗ್ರಂಥಗಳಿಂದ
    ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್)
    ಸೂರಃ ಆಲು ಇಮ್ರಾನ್ 3:110
    ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ).
    ಇಣುಕಿ ಹೋದವರು

    satyasandesha
    ಈಗ ನೋಡುತ್ತಿರುವವರು
    ವೀಕ್ಷಣಾಗಾರರ ಸ್ಥಳ
    Locations of visitors to this page
    ಇಷ್ಟರವರೆಗೆ ಬರೆದದ್ದು
    ಅಜ್ಞಾನವು ಅಳಿಯಲಿ, ಸುಜ್ಞಾನವು ಬೆಳಗಲಿ
    Thursday, June 11, 2009
    "ಓದಿರಿ ಸ್ರಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ,ಅವನು ಹೆಪ್ಪುಗಟ್ಟಿದ ಒಂದು ರಕ್ತ ಪಿಂಡದಿಂದ ಮಾನವನನ್ನು ಸ್ರಷ್ಟಿಸಿದನು, ಓದಿರಿ ಮತ್ತು ನಿಮ್ಮ ಪ್ರಭು ಮಹಾ ಉದಾರಿ,ಅವನು ಲೇಖನಿಯ ಮೂಲಕ ವಿದ್ಯೆ ಕಲಿಸಿದನು,ಮಾನವನು ತಿಳಿದಿರದಂತಹಾ ಜ್ಞಾನವನ್ನು ಅವನು ದಯಪಾಲಿಸಿದನು."
    ಇದು ಮೊತ್ತ ಮೊದಲ ಬಾರಿಗೆ ಅವತೀರ್ಣಗೊಂಡ ಕುರ್‌ಆನಿನ ಪ್ರಥಮ ಅಧ್ಯಾಯ ವಾಗಿದೆ.ಈ ಸೂಕ್ತ ಅವತೀರ್ಣವಾಗಿ ಒಂದೂವರೆ ಸಾವಿರ ವರ್ಷಗಳು ಕಳೆದರೂ ಈಗಲೂ ಮುಸ್ಲಿಮರು ವಿದ್ಯೆಯಲ್ಲಿ ಬಹಳಷ್ಟು ಹಿಂದಿರುವುದು ತೀರಾ ದುಃಖಕರ ಸಂಗತಿಯಾಗಿದೆ. ಇಸ್ಲಾಮ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. "ಶಿಕ್ಷಣ ಪಡೆಯುವುದು ಪ್ರತೀಯೊಬ್ಬ ಮುಸ್ಲಿಂ ಸ್ತ್ರೀ ಪುರುಷರ ಮೇಲೆ ಕಡ್ಡಾಯವೆಂದು ನೆಬಿ (ಸ.ಅ) ರವರು ಸಾರಿದ್ದಾರೆ"." ಜ್ಞಾನಿಗಳು ಅಜ್ಞಾನಿಗಳು ಎಂದಾದರೂ ಸರಿಸಮಾನರಾಗಬಲ್ಲರೆ?" ಎಂದು ಅಲ್ಲಾಹು ಕುರ್‌ಆನಿನಲ್ಲಿ ಕೇಳುತ್ತಾನೆ. ಕತ್ತಲು ಬೆಳಕು ಹೇಗೆ ಸರಿಸಮಾನರಾಗಲಾರವೋ ಕಣ್ಣಿದ್ದವನೂ ಅಂಧನೂ ಹೇಗೆ ಸರಿಸಮಾನಲಾಗಲಾರವೋ? ಹಾಗೆಯೇ ಜ್ಞಾನಿಯೂ ಅಜ್ಞಾನಿಯೂ ಸರಿಸಮಾನಲಾಗಲಾರ. ಆದರೆ ನಮ್ಮ ಸಮೂಹ ಮಾತ್ರ ಶಿಕ್ಷಣದ ಮಹತ್ವವನ್ನರಿಯದೆ ಅದರ ಅಗತ್ಯವನ್ನು ತಿಳಿಯದೆ ಅಧಪತನದ ಹಾದಿಯಲ್ಲಿದೆ. ಇದಕ್ಕೆಲ್ಲಾ ಕಾರಣರು ಯಾರು? ಹೇಗೆ? ಮತ್ತು ಏನು? ಎಂಬ ಪ್ರಶ್ನೆ ಮನಸ್ಸಿನ ಮೂಲೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಾಗಿ ಮೂಡಿ ಬರುತ್ತಿದೆ.
    ಮಕ್ಕಳಿಗೆ ಶಿಕ್ಷಣ ಕಲಿಯಲು ಆಸೆ ಬೆಟ್ಟದಷ್ಟಿದ್ದರೂ , ಅವರ ಅಂತರಂಗದ ಆಸೆಗೆ ಒತ್ತು ಕೊಡದೆ ಪೊಳ್ಳು ನೆವಗಳನ್ನು ಹೇಳಿ ಅರ್ಧದಲ್ಲಿಯೇ ಶಿಕ್ಷಣ ವನ್ನು ಮೊಟಕುಗೊಳಿಸುವ ಹೆತ್ತವರ ಸಂಸ್ಕ್ರತಿಯನ್ನು ಕಂಡು ಖೇದವೆನಿಸುತ್ತಿದೆ.ತಮ್ಮ ಅನಿವಾರ್ಯಗಳಿಗಾಗಿ ಮಕ್ಕಳ ವಿಧ್ಯಾಭ್ಯಾಸವನ್ನು ಬಲಿ ಕೊಡುವುದು ಎಷ್ಟು ಸರಿ? ಇದು ಎಲ್ಲಾ ಹೆತ್ತವರು ಯೋಚಿಸಬೇಕು.ಒಬ್ಬ ತಂದೆ ತನ್ನ ಮಕ್ಕಳೀಗೆ ಉನ್ನತ ಮಟ್ಟದೆ ಶ್ರೇಷ್ಟ ಶಿಕ್ಷಣ ವನ್ನು ಕೊಟ್ಟರೆ ಅದುವೇ ಆ ಮಕ್ಕಳಿಗೆ ಇಹ ಪರಗಳೆರಡರಲ್ಲೂ ವಿಜಯಿಯಾಗುವ ಅದ್ಬುತ ನಿಧಿಯಾಗಿರುತ್ತದೆ. ಅಲ್ಲದೆ ತಂದೆ ತಾಯಂದಿರ ವಿಜಯಕ್ಕೂ ಕೂಡಾ... ಶ್ರೇಷ್ಟ ಮಟ್ಟದ ಶಿಕ್ಷಣಕ್ಕೆ ಬದಲಾಗಿ ಒಬ್ಬ ತಂದೆ ತನ್ನ ಮಕ್ಕಳಿಗೆ ಬೇರೇನನ್ನೂ ಕೊಡಲಾರ. ಎಷ್ಟು ಆಸ್ತಿ ಅಂತಸ್ತಿದ್ದರೂ ಅಷ್ಟೇ..ಎಂತಹಾ ದುರ್ಬಲ ಪ್ರಸಂಗ ಗಳಲ್ಲೂ ಬದುಕನ್ನು ಎದುರಿಸುವ ಶಕ್ತಿ ಬರುವುದು ಜ್ಞಾನದ ಅರಿವಿನಿಂದಲೇ ಹೊರತು , ಹಣದ ಬಲದಿಂದ ಅಲ್ಲ. ಅಲ್ಲದೆ ಹಣ ಮತ್ತು ಅಧಿಕಾರವೂ ಎಂದಿಗೂ ಅದೇ ಸರ್ವಸ್ವವೂ ಅಲ್ಲ.
    ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ವಿಧ್ಯಾಭ್ಯಾಸ ಅರ್ಧದಲ್ಲಿಯೇ ಮೊಟಕು ಗೊಳಿಸುವುದನ್ನು ನಾವು ಕಾಣ ಬಹುದು. ಎಷ್ಟು ಕಲಿತರೂ ಅಡುಗೆ ಕೋಣೆಯಲ್ಲಿ ಇರುವವಳಲ್ವಾ? ಹೆಣ್ಣು . ಮುಸುರೆ ತಿಕ್ಕುವವಳಿಗೆ ಶಿಕ್ಷಣ ಯಾಕೆ? ಮುಸುರೆ ತಿಕ್ಕಳು ಕಲಿತರೆ ಸಾಕು ಎಂಬ ತಾತ್ಸಾರ ಭಾವವೇ? ಇದಕ್ಕೆ ಕಾರಣವಿರಬಹುದು. ಆದ್ರೆ ಹೆಣ್ಣೊಂದು ಕಲಿತರೆ ಸ್ಕೂಲೊಂದು ತೆರೆದಂತೆ ಎಂಬುವುದನ್ನು ಮರೆಯುತ್ತಾರೆ ಹೆಚ್ಚಿನ ಜನ. ಹೆಣ್ಣು ಕಲಿತರೆ ಕುಟುಂಬ ಒಳ್ಳೆಯದಾಗುತ್ತದೆ, ಕುಟುಂಬ ಒಳ್ಳೆಯದಾದರೆ ಸಮಾಜ ಒಳ್ಳೆಯದಾಗುತ್ತೆ. ಸಮಾಜ ಒಳ್ಳೆಯದಾದರೆ ರಾಷ್ಟ್ರ ಒಳ್ಳೆಯದಾಗುತ್ತದೆ. ಇದು ನಾವು ಯಾವಾಗಲೂ ಕೇಳಿ ಬರುತ್ತಿರುವ ಬಾಯಿ ಮಾತಾಗಿರುತ್ತದೆ.ರಾಷ್ಟ್ರ ಒಳ್ಳೆಯದಾಗಬೇಕಾದರೆ ಹೆಣ್ಣು ಕಲಿಯಬೇಕು. ಶಿಕ್ಷಿತಳಾಗಬೇಕು. ಕುಟುಂಬ ಮತ್ತು ಸಮಾಜ ರಾಷ್ಟ್ರದ ಪ್ರಮುಖ ಕೀಲಿ ಕೈ ಹೆಣ್ಣು. ಅಲ್ಲದೆ ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಈ ಎಲ್ಲಾ ಆಯಾಮಗಳಲ್ಲಿ ವಿವಿಧ ಮಜಲುಗಳಲ್ಲಿ ನೋಡಿದರೆ ಹೆಣ್ಣು ಶಿಕ್ಷಿತಳಾಗ ಬೇಕಿರುವುದು ಅಗತ್ಯ ಎಂಬುವುದನ್ನು ಮನಗಾನ ಬಹುದು.
    ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯ ವಿಲ್ಲವೆಂದು ಹೇಳುತ್ತಿರುವವರು ೧೪೩೦ ವರ್ಷಗಳ ಹಿಂದೆ ಒಮ್ಮೆ ಕಣ್ಣಾಡಿಸಿ ನೋಡಲಿ. ಅಥವಾ ಬಲ್ಲವರಿಂದ ಕೇಳಿ ತಿಳಿಯಲಿ. ಹದೀಸ್ ಪಂಡಿತರಲ್ಲಿ ಅಗ್ರಗಣ್ಯರಾಗಿ ಅತೀ ಹೆಚ್ಚು ವರದಿ ಮಾಡಿದ ಹದೀಸ್ ಪಂಡಿತೆಯೆಂಬ ಬಿರುದು ತೊಟ್ಟ ನಮ್ಮ ಮಾತೆ ಹ ಆಯಿಶಾ ಬೀವಿ (ರ.ಅ)ರವರನ್ನು ನೋಡಿ ಕಲಿಯಲಿ. ಅಡುಗೆ ಕೋಣೆಯಲ್ಲಿ ಮುಸುರೆ ತಿಕ್ಕುವವಳಿಗೆ ಶಿಕ್ಷಣ ಯಾಕೆ ಎಂಬ ಪ್ರಶ್ನೆ ಇನ್ನಾದರೂ ಅಳಿಯಲಿ.ಇಸ್ಲಾಮಿನಲ್ಲಿ ಸ್ತ್ರೀ ಗೆ ಕಲಿಯಲು ಅನುಮತಿ ನೀಡಿಲ್ಲವೆಂಬುವುದು ಪೊಳ್ಳು ವಾದವಷ್ಟೇ. ಹ ಅಬ್ದುಲ್ಲಾ ಬಿನ್ ಅಬ್ಬಾಸ್ (ರ.ಅ) ರವರು ವರದಿ ಮಾಡುತ್ತಾರೆ.ಪ್ರವಾದಿ (ಸ.ಅ) ರವರು ಹೇಳಿದರು. ಯಾವನು ಮೂವರು ಪುತ್ರಿಯ ಅಥವಾ ಸಹೋದರಿಯರನ್ನು ತರಬೇತು ಗೊಳಿಸಿ ವಿದ್ಯೆ ನೀಡಿ ಅವರೊಂದಿಗೆ ಅತ್ಯುತ್ತಮ ವರ್ತನೆ ತೋರುವನೋ "ಅಲ್ಲಾಹನು ಅವನಿಗೆ ಸ್ವರ್ಗ ವನ್ನು ಕಡ್ಡಾಯಗೊಳಿಸುತ್ತಾನೆ"ಆಗ ಒಬ್ಬ ವ್ಯಕ್ತಿ ಇಬ್ಬರು ಪುತ್ರಿಯರು ಅಥವಾ ಸಹೋದರಿಯರಿದ್ದರೆ??? ಎಂದು ಪ್ರಶ್ನಿಸಿದಾಗ ಪ್ರವಾದಿವರ್ಯ(ಸ.ಅ)ರು ಆತನಿಗೂ ಅದೇ ಪ್ರತಿಫಲ ದೊರಕುವುದು ಎಂದರು. ಹ ಅಬ್ದುಲ್ಲಾ ಬಿನ್ ಅಬ್ಬಾಸ್ (ರ.ಅ) ರವರು ಹೇಳುತ್ತಾರೆ, ಯರಾದರೂ ಒಬ್ಬಳು ಪುತ್ರಿ ಅಥವಾ ಸಹೋದರಿಯ ಬಗ್ಗೆ ಪ್ರಶ್ನಿಸುತ್ತಿದ್ದರೂ ಪ್ರವಾದಿವರ್ಯ(ಸ.ಅ)ರು ಅದೇ ಉತ್ತರವನ್ನು ನೀಡುತ್ತಿದ್ದರು. (ಮಿಶ್ಕಾತ್) ಅಲ್ಲದೆ ಹೆಣ್ಣೊಬ್ಬಳು ಶಿಕ್ಷಿತಳಾದರೆ ಅದರಿಂದ ಕುಟುಂಬಕ್ಕೆ ಬಹಳಷ್ಟು ಪ್ರಯೋಜನವಿದೆ. ಉಳಿತಾಯ ಹಾಗೂ ಒಳಿತೂ ಇದೆ. ಯಾವುದೇ ಮಜಲುಗಳಲ್ಲಿಯೂ ತಾನು ಕಲಿತ ಶಿಕ್ಷಣದ ಪ್ರಯೋಜನವನ್ನು ಪಡೆಯಬಹುದಾಗಿದೆ. ೧.. ವರಾನ್ವೇಷನೆಯ ವೇಳೆಯಲ್ಲಿ ಅಷ್ಟು ಕಲಿತಿದ್ದಾಳೆ, ಇಷ್ಟು ಕಲಿತಿದ್ದಾಳೆಂದು ಕಲಿಯದ ಡಿಗ್ರಿಗಳನ್ನು ಅವಳ ಹೆಸರಿನ ಮುಂದೆ ಹಾಕಿ, ಸುಳ್ಳು ಹೇಳಿ ಮದುವೆ ಮಾಡುವುದು ತಪ್ಪುತ್ತದೆ.
    ೨... ಮಕ್ಕಳಿಗೆ ಮನೆಯಲ್ಲಿಯೇ ಟ್ಯೂಷನ್ ಕೊಟ್ಟು ಮಕ್ಕಳ ಟೈಮೂ ಹಾಗೂ ಹಣವೂ ಉಳಿತಾಯ ಮಾಡಬಹುದು.
    ೩... ಡಾಕ್ಟರ್ ಕೊಟ್ಟ ಚೀಟಿ ಅಥವಾ ಬೇರೇನಾದರೂ ಕಾಗದವನ್ನು ಹಿಡಿದು ಇದು ಸ್ವಲ್ಪ ಓದಿ ಏನಿದೆಯೆಂದು ಹೇಳು. ಎಂದು ಎಲ್ಲರ ಬಳಿ ಅಂಡಲೆಯುವುದು ತಪ್ಪುತ್ತದೆ.
    ಬರೆಯುತ್ತಾ ಹೋದರೆ ಇಂತಹಾ ಎಷ್ಟೆಷ್ಟೋ ಉದಾಹರಣೆಗಳು ಸಿಗಬಹುದು ನಮಗೆ. ಅಥವಾ ಎಷ್ಟೋ ಬಾರಿ ಅದರ ಅನುಭವವೂ ನಮಗಾಗಿರಬಹುದು.ಶಿಕ್ಷಣದಿಂದ ಲಾಭವೇ ಹೊರತು ಎಂದೂ ನಷ್ಟವಾಗಲು ಸಾಧ್ಯವಿಲ್ಲ. ಶಿಕ್ಷಣ ಸಮರಸ ಸುಸಂಪನ್ನ ಸುಸಂಸ್ಕ್ರತ ಹಾಗೂ ಸಮರ್ಪಿತ ಜೀವನವನ್ನು ನಡೆಸಲು ಶಿಕ್ಷಣವು ಇಂದು ಅತೀ ಅಗತ್ಯ ವಾಗಿದೆ.
    ಪ್ರಾಣ ವಾಯು ನಮಗೆ ಹೇಗೆ ಅನಿವರ್ಯವೋ ಹಾಗೆಯೇ ಶಿಕ್ಷಣವೂ ಅನಿವಾರ್ಯ. ನಮ್ಮಲ್ಲಿ ಹೆಚ್ಚಿನವರು ಈ ಶಿಕ್ಷಣದ ಮಹತ್ವವನ್ನು ಅರಿತಿಲ್ಲದಿರುವುದ ದುರಾದ್ರಷ್ಟವಲ್ಲದೆ ಮತ್ತೇನು?ಮನುಷ್ಯ ಮಸಿಷ್ಕವನ್ನು ಕ್ರಿಯಾಗೊಳಿಸುವ ಸಾಧನವಾಗಿದೆ ಶಿಕ್ಷಣ. ಅಸತ್ಯದಿಂದ ಸತ್ಯದೆಡೆಗೆ..ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವುದೇ ಜ್ಞಾನ.ಒಂದು ಸ್ವಸ್ಥ ಸಮಾಜ ಮತ್ತು ಸುಂದರ ವಾತಾವರಣವನ್ನು ರೂಪಿಸಬೇಕೆಂದರೆ ಶಿಕ್ಷಣ ಹಾಗೂ ಜ್ಞಾನ ದ ಬೆಳಕಿನಿಂದ ಮಾತ್ರ ಸಾಧ್ಯ.ಅರಿವು ಅಥವಾ ಜ್ನಾನ ಅಲ್ಲಾಹುವಿನ ಒಂದು ಅಪಾರ ಅನುಗ್ರಹವಾಗಿದೆ.ಜ್ನಾನವಿದ್ದರೆ ಸಾಲದು. ಜ್ನಾನದ ಮಹತ್ವವನ್ನು ಅರಿತು ಕೊಳ್ಳಬೇಕು. ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಸಾಧನವೇ ಶಿಕ್ಷಣ.
    ಖ್ಯಾತ ಸಾಹಿತಿಯೋರ್ವರು ನಮ್ಮ ಮುಂದೆ ಶಿಕ್ಷಣದ ಮಹತ್ವವನ್ನು ಬಿಚ್ಚಿಟ್ಟಿದ್ದಾರೆ."ತಿಳಿದಷ್ಟೂ ತಿಳಿಯಬೇಕೆನಿಸುವುದೇ ಜ್ಞಾನ. ಜ್ಞಾನ-ಅಜ್ಞಾನವನ್ನು ವಿಧಿವತ್ತಾಗಿ ವಿವರಿಸಿ ವಿಶ್ಲೇಷುವುದೇ ವಿದ್ಯೆ. ತಿಳಿದಷ್ಟೂ ತಿಳಿಯಲು ಹೊರಟವರು ನಾವು. ತಿಳಿದಿದ್ದಾಯಿತು ಎನ್ನಿಸಿದ ಕೂಡಲೆ ನಾವು ಮುಂದೆ ಹೊರಡದೇ ನಿಂತಲ್ಲೇ ನಿಂತು ಬಿಡುತ್ತೇವೆ. ಹಾಗೆ ನಿಲ್ಲುವುದು ಬದುಕಿನ ರೀತಿಯಲ್ಲ.
    ನಮಗೆ ಸೇರದ ಸಂಗತಿಗಳ ನಡುವೆಯೆ ನಮ್ಮ ಬದುಕು ಇದೆ ಎಂಬುದನ್ನು ನೋಡುತ್ತಲೆ ಇದ್ದೇವೆ; ಬದುಕಿದ್ದೇವೆ; ಬದುಕಲೆ ಬೇಕು. ನಮಗೆ ಸೇರದ ವಿಷಯಗಳ ಬಗ್ಗೆ ಚಿಂತಿಸುತ್ತೇವೆ; ಹಾಗಿ ಚಿಂತಿಸುವುದೇ ಜೀವಂತಿಕೆಯ ಲಕ್ಷಣವೇನೋ ಎನ್ನಿಸುತ್ತಲೂ ಇರುತ್ತದೆ. ಹಾಗೆ ಚಿಂತಿಸುವಂತೆ ಮಾಡುವುದೇ ನಿಜವಾದ ಜ್ಞಾನರ್ಜನೆಯ ಮೊದಲ ಹಂತ. ಹಾಗೆ ಮುಂದುವರಿಯುವುದೂ ಕೂಡ. ಹದಗೆಟ್ಟಿರುವುದನ್ನೆಲ್ಲ ನೋಡುತ್ತ ಹದವರಿತು ಬದುಕುವುದು ಹೇಗೆಂದು ಅರಿಯವುದೇ ಆಗಿರುತ್ತದೆ. ಅಂತಹ ಚಿಂತೆಯಿಂದಲೇ ಚಿಂತನೆಯೂ ಬರುತ್ತದೆ. ಅದು ಬರೀ ಅಕ್ಷರ ವಿದ್ಯೆಯಲ್ಲ. ಅಂಕಗಳಿಸುವು ವಿದ್ಯೆಯಲ್ಲ; ಅನುಭವಕ್ಕೆ ಬೆಲೆ ತೆರಬೇಕಾದ ಮನಸ್ಸು. ಜ್ಞಾನರ್ಜನೆಗಾಗಿಯೆ ಮಾಡಬೇಕಾದ ತಪಸ್ಸು."
    -ಎಚ್.ಶಿವರಾಂ
    ಕಲಿಯಲು ಮನ್ಸಿದ್ದವರು ನಮ್ಮಲ್ಲಿ ತುಂಬ ಜನ ಇದ್ದಾರೆ. ಆದರೆ ಯಾಕೋ ಅನಗತ್ಯ ಭಯದಿಂದ ಕಲಿಕೆಯಿಂದ ಹಿಂದೆ ಸರಿಯುತ್ತಿದ್ದರೆ ಅವರು. ಈ ವಯಸ್ಸಿನಲ್ಲಿ ನಾನು ಕಲಿಯುವುದಾ? ಈ ವಯಸ್ಸಿನಲ್ಲಿ ಕಲಿಯಲು ನನಗೆ ಸಾಧ್ಯವಾಗಬಹುದಾ? ಎಂದು ಹೇಳುವವರು ನೆಬಿ (ಸ.ಅ)ರವರಿಗೆ ವಹ್ಯ್ ಲಭಿಸಿದ್ದು.( ಅನಕ್ಷರಸ್ಥರಾದ ನೆಬಿ ಸ.ಅ ರವರಿಗೆ ಕುರ್‌ಆನ್ ವಹ್ಯ್ ಮುಖೇನ ಬಂದಿದ್ದು) ಅವರ ೪೦ ನೇ ವರ್ಷದಲ್ಲಿ ಎಂಬುವುದನ್ನು ಮನಗಾನಬೀಕು.ಕಲಿಕೆಗೆ ವಯಸ್ಸಿನ ಪರಿಮಿತಿಯಿಲ್ಲ. ಕಲಿಕೆಗೆ ಬೇಕಾದುದು ಶುದ್ಧವಾದ ಮನಸ್ಸು, ಕಲಿಯುತ್ತೇನೆ ಎಂಬ ಛಲ. ಅಹಂಕಾರ ಮತ್ತು ನಾಚಿಕೆ ಇರುವವನು ಎಂದೂ ಕಲಿಯಲಾರ.ಕಲಿಕೆ ಪೂರ್ಣ ವಾಗಿರ ಬೇಕೆಂದರೆ ಇವೆರಡನ್ನೂ ಬಿಡಬೇಕು. ಮತ್ತು ಈ ದುವಾ ಅನ್ನು ಯಾವಾಗಲೂ ಪಠಿಸಬೇಕು "ಅಲ್ಲಾಹನೇ ನನಗೆ ಇನ್ನಷ್ಟು ಜ್ಞಾನವನ್ನು ದಯಪಾಲಿಸು." (ತ್ವಾಹಾ ೧೧೪)
    ಈಗ ನಮ್ಮಲ್ಲಿ ಹೆಚ್ಚಿನ ಜನರು ಶಿಥಿಲವಾಗುತ್ತಿರುವ ಓದು ಸಂಸ್ಕ್ರತಿಗೆ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹವೇ... ಆದರೆ ಮಕ್ಕಳಿಗೆ ಕೇವಲ ಲೌಕಿಕ ಶಿಕ್ಷಣ ಕೊಟ್ಟರೆ ಮಾತ್ರ ಸಾಲದು ಅದರೊಡನೆ ಧಾರ್ಮಿಕ ಶಿಕ್ಷಣವೂ ಬೇಕು. ಇಂದಿನ ಕಾಲದಲ್ಲಿ ಲೌಕಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ಜನರನ್ನು ಕಾಣುತ್ತೇವೆ ನಾವು.ಒಂದು ಮಗುವಿಗೆ ಉತ್ತಮ ಲೌಕಿಕ ಹಾಗೂ ಧಾರ್ಮಿಕ ಶಿಕ್ಷಣ. ಮಾರ್ಗದರ್ಶನ ತರಬೇತಿ ಕೊಟ್ಟರೆ ಮಾತ್ರ ಮಗುವಿನ ಸರ್ವತೋಮುಖ ಬೆಳವನಿಗೆ ಸಾಧ್ಯ. ಇದು ಹೆಚ್ಚಿನ ರಕ್ಷಕರು ಅರ್ಥ ಮಾಡಿಕೊಳ್ಳಬೇಕು. ಮಕ್ಕಳ ಲೌಕಿಕ ಶಿಕ್ಷಣಕ್ಕಾಗಿ ಲಕ್ಷಗಟ್ಟಳೆ ಹಣ ಖರ್ಚು ಮಾಡುವ ರಕ್ಷಕರು ಧಾರ್ಮಿಕ ಶಿಕ್ಷಣಕ್ಕಾಗಿ ಖರ್ಚು ಮಾಡಲು ಹಿಂಜರಿಯಬಾರದು. ಹೆಚ್ಚಿನ ಪೋಷಕರು ಮಕ್ಕಳ ಅಮಿತ ಸಮಯವನ್ನು ಲೌಕಿಕ ಶಿಕ್ಷಣಕ್ಕಾಗಿ ಮಾತ್ರ ಬಳಸುತ್ತಾರೆ. ಇದೇ ಪೋಷಕರು ಮಾಡುವ ಅತೀ ದೊಡ್ಡ ತಪ್ಪು. ದಿನವಿಡೀ ಲೌಕಿಕ ವಿಧ್ಯಾಭ್ಯಾಸಕ್ಕಾಗಿ ಸಮಯ ಮೀಸಲಿಡುವ ಮಕ್ಕಳು ಧಾರ್ಮಿಕ ವಿಧ್ಯಾಭ್ಯಾಸಕ್ಕಾಗಿ ಮೀಸಲಿಡುವುದು ಕೇವಲ ಒಂದೇ ಘಂಟೆಯೆಂದರೆ ಬಹಳ ದೊಡ್ಡ ಸೋಜಿಗವೇ ಸರಿ. ದಿನಕ್ಕೆ ಒಂದು ಗಂಟೆ, ಅದೂ ಐದನೇ ಕ್ಲಾಸ್ ವರೆಗೆ ಮಾತ್ರ ಹೆಚ್ಚೆಂದರೆ ಏಳನೇ ತರಗತಿವರೆಗೆ.. ಅದಕ್ಕಿಂತಾ ಹೆಚ್ಚಾಗಿ ಯಾರೂ ಓದುವುದಿಲ್ಲ.ಯಾರಾದರೂ ಪೋಷಕರಲ್ಲಿ ಮಗಳ ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿದರೆ.. ಮಗಳು ಈಗ ಪಸ್ಟ್ ಇಯರಲ್ಲಿ.. ಮದ್ರಸಾ..? ಎಂದು ಕೇಳಿದರೆ. ಮದ್ರಸಾಕ್ಕೆ ಈಗ ಹೋಗುವುದಿಲ್ಲ.ಐದನೆ ಕ್ಲಾಸ್ ಪೂರ್ತಿಯಾಗಿದೆ. ಇನ್ನೂ ಕಲಿಯಬೇಕೆಂದರೆ ಹೇಗೆ? ಕೈ ಕಾಲು ಬಲಿತಿದೆ ಯಲ್ವಾ? ಇಷ್ಟು ದೊಡ್ಡವಳು ಮದ್ರಸಾಗೆ ಹೋಗುವುದೆಂದರೆ ನಾಚಿಕೆಯ ವಿಷಯವೇ ಸರಿ.ಎಂದು ಮರುತ್ತರ ನೀಡುತ್ತಾರೆ. ಮದ್ರಸಾ ಕಲಿಯುವಾಗ ದೊಡ್ಡವಳೆಂದು ಹೇಳುವ ಅಪ್ಪಂದಿರು ಸ್ಕ್ಲೂಲ್ ಗೆ ಯಾ ಕಾಲೇಜ್ ಗೆ ಕಲಿಸುವಾಗ ಮಾತ್ರ ದೊಡ್ಡವಳಾಗದಿರುವುದು ವಿಶೇಷ. ಇಂತಹಾ ಸ್ಥಿತಿಯಲ್ಲಿ ಒಂದು ಸ್ವಸ್ಥ ಸಮಾಜ, ಸ್ವಸ್ಥ ಕುಟುಂಬ ಕನಸಿನ ಮಾತೇ ಸರಿ.
    ಇಂತಹಾ ಮಕ್ಕಳ ಮನೋವಿಕಾಸ ಮತ್ತು ವ್ಯಕ್ತಿತ್ವ ಜ್ಞಾನ ಅರಳುವ ಬದಲು ಮುರುಟುವ ಒರಟಾಗಿ ಬಿಡುವ ಅಪಾಯವಿದೆ. ಅಥವಾ ಶಿಕ್ಷಣ ಸುರಕ್ಷೆ ಆಗುವುದರ ಬದಲು ಶಿಕ್ಷೆ ಆಗಿಬಿಡುವ ಅಪಾಯವೂ ಇದೆ. ಇದಕ್ಕೆ ಇತ್ತೀಚಿಗೆ ನಡೆಯುತ್ತಿರುವ ವಿಧ್ಯಾಮಾನವೇ ಸಾಕ್ಷಿ, ಆದರೆ ಇದಕ್ಕೆಲ್ಲಾ ಹೊಣೆ ಪೋಷಕರೇ..ಸಾಧಾರಣವಾಗಿ ಪೋಷಕರು ಅತೀ ಕಡಿಮೆ ಕೆಲಸ ಮಾಡಿ, ಅತೀ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಹಣ ಗಳಿಕೆ , ಕೋಟಿ ಕೋಟಿ ಸಂಪಾದಿಸುವುದು ಹೇಗೆ? ಯಾವುದು ಕಲಿತರೆ ಹೆಚ್ಚು ಹಣ ಸಂಪಾದಿಸಬಹುದು.? ಎಂಬ ಚಿಂತೆಯಲ್ಲೇ ಅಂತಹದ್ದೊಂದು ಗುರಿಯನ್ನೇ ಮಕ್ಕಳ ಮನಸ್ಸಿಗೆ ತುರುಕಿ ಬಿಡುತ್ತಾರೆ.ಮಕ್ಕಳೂ ಪೋಷಕರು ತಲೆಗೆ ತುಂಬಿದನ್ನೇ ಅನುಸರಿಸುತ್ತಾ , ಮುಂದೊಂದು ದಿನ ಅವರಿಗೇ ಎದುರುತ್ತರ ಕೊಡುವಷ್ಟರ ಮಟ್ಟಿಗೆ ಬೆಳೆಯುತ್ತಾರೆ. ಮುಂದೆ ತಂದೆ ತಾಯಂದಿರು ಅವರಿಗೆ ಮುದಿ ಗೂಬೆ ಗಳಾಗುತ್ತಾರೆ.ಕೆಲಸಕ್ಕೆ ಬಾರದವರಾಗುತ್ತಾರೆ.ಅವರನ್ನು ವ್ರದ್ಧಾಶ್ರಮಕ್ಕೋ ಅಥವಾ ಮನೆಯಿಂದ ಹೊರಕ್ಕೋ ಅಟ್ಟಿ ಬಿಡುತ್ತಾರೆ. ಇದು ಇಂದಿನ ಸಮಾಜದಲ್ಲಿ ನಮ್ಮ ಕಣ್ಣಾರೆ ಕಾಣುವ ದುರಂತಗಳು. ಆದರೆ ಇಂತಹಾ ಸಮಯದಲ್ಲಿ ಮಕ್ಕಳಿಗೆ ಲೌಕಿಕ ಶಿಕ್ಷಣದೊಡನೆ ಧಾರ್ಮಿಕ ಶಿಕ್ಷಣವೂ ಕೊಟ್ಟರೆ ಎಂದೂ ಇಂತಹಾ ಪ್ರಸಂಗ ಎದುರಾಗಲು ಸಾಧ್ಯತೆಯೇ ಇರುವುದಿಲ್ಲ. ಬದಲಾಗಿ ಗುರು ಹಿರಿಯರನ್ನು ಪ್ರೀತಿಸಲು ಕಲಿಯುತ್ತಾರೆ.ಗುರು ಹಿರಿಯರು , ಮಾತಾ ಪಿತರೆಂದರೆ ಸ್ವರ್ಗ ಅನ್ವೇಷಿಸಲು ಇದೊಂದು ಸುಸಮಯ ಎಂದೆನ್ನು ಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಇಂತಹಾ ಜನರಿರುವು ಬಹಳಷ್ಟು ವಿರಳ ವೆಂದೇ ಹೇಳಬೇಕು.
    ಇಂದು ನಮ್ಮ ಸಮೂಹ ದತ್ತ ಒಮ್ಮೆ ಕಣ್ಣಾಡಿಸಿ ನೋಡಿದರೆ ಇದರ ಸ್ಥಿತಿ ಗತಿ ಗಳು ನಮಗೆ ಕಾಣಸಿಗಬಹುದು. ಹೆಚ್ಚಿನ ಜನರಿಗೆ ಕುರ್‌ಆನ್ (ತಜ್ ವೀದ್ ನೊಡನೆ)ಸರಿಯಾಗಿ ಓದಲು ಹರಫ್ ಗಳನ್ನು ಉಚ್ಚಾರಿಸಲು ತಿಳಿದಿಲ್ಲ ಇದರ ಬಗ್ಗೆ ಖೇದವೂ ಇಲ್ಲ. ಅಥವಾ ಕಲಿಯಬೇಕೆನ್ನುವ ಉಮೇದು ಅವರಲ್ಲಿಲ್ಲ. ನಮಾಜಿನ ಶರ್ತ್ ಫರ್ಳ್ ಗಳು ತಿಳಿದಿಲ್ಲ. ನಮಾಜನ ಮಹತ್ವದ ಕುರಿತು ಅರಿವಿಲ್ಲ.ಹೆಚ್ಚಿನ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳ ನಡುವೆ ಬಿಝಿಯಾಗಿ, ಇದನ್ನೆಲ್ಲಾ ಚಿಂತಿಸುವದನ್ನು ಕೂಡಾ ಮರೆತು ಬಿಟ್ಟಿದ್ದಾರೆ.ಎಂಬುವುದು ದುಃಖಕರ ಸಂಗತಿಯೇ ಹೌದು.ಇದಕ್ಕೆಲ್ಲಾ ಕಾರಣ ಏನು? ಹೊಣೆ ಯಾರದ್ದು?? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಉತ್ತರ ಇನ್ನೆಲ್ಲೋ ಸಮಾಧಿಯಲ್ಲಿ ಆಕಳಿಸಿ ತನ್ನ ಮಗ್ಗುಲು ಬದಲಾಯಿಸುತ್ತದೆ. ಮನುಷ್ಯ ಮಾತ್ರ ಇದು ತನಗೆ ಸಂಭದಿಸಿದ್ದೇ ಅಲ್ಲವೇನೋ ಎಂಬಂತೆ ನಿರ್ಲಿಪ್ತನಾಗಿದ್ದಾನೆ.
    posted by ASHRAF @ 7:16 AM  
    0 Comments:

    Post a Comment

    << Home
     
    About Me

    Name: ASHRAF
    Home: India
    About Me: ಅಸ್ಸಲಾಮ್ ಅಲೈಕುಮ್
    See my complete profile
    Previous Post
    Archives
    ನಾ ಬರೆದದ್ದು
    Powered by

    BLOGGER

    Older Posts
    © 2005 ನೇರದಾರಿ Blogger Templates by Isnaini and Cool Cars Pictures