ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ನಾ ಯಾರಲ್ಲಿ ಹೇಳಲಿ.........? |
Thursday, September 17, 2009 |
ನಾ ಯಾರಲ್ಲಿ ಹೇಳಲಿ ಮನುಜಾ.. ನನ್ನೀ ಮನದ ವೇದನೆಯನ್ನಾ..? ಕೇಳಲು ಬಾಕಿಯಿರಬಹುದೇ ಇನ್ನೂ ಮನುಷ್ಯತ್ವ ವಿರುವ ಆ ಜನ.
ಏನೆಂದು ಹೇಳಲಿ ಮನುಜಾ? ಹೇಗೆ ಹೇಳಲಿ ನಿನ್ನಲ್ಲಿ? ಎದೆಯ ರಕ್ತವನ್ನೇ ಬಸಿದು ಬೆವರಿನ ಕಣ ಕಣಗಳಲ್ಲೂ ರಕ್ತದೋಕುಳಿಯನ್ನೇ ಹರಿಸಿ ಈ ಪಾಪಿ ಮಗಳ ಸುಂದರ ಬದುಕಿಗಾಗಿ ಪಾಡು ಪಟ್ಟ ಆ ತಂದೆಯ ಕರುಣಾಜನಕ ಕಥೆಯನ್ನಾ..?
ನೂಗದ ಎತ್ತಿನಂತೆ ಸಂಸಾರದ ಭಾರವನ್ನು ಹೊತ್ತು ಕಣ್ಣೀರಲ್ಲೇ ಬದುಕು ಸಾಗಿಸುತ್ತಿರುವ ನನ್ನೀ..ತಾಯಿಯ ಕಥೆಯಲ್ಲದ ವ್ಯಥೆಯನ್ನು ನಾ..ಹೇಗೆ ಬಣ್ಣಿಸಲಿ.. ಮನುಜಾ ನಿನ್ನಲ್ಲಿ?
ಕೇಳಲು ಸಮಯವಿರಬಹುದೇ ನಿನಗೆ? ಮಾನವೀಯತೆಯನ್ನು ಮರೆತು ಮ್ರಗಗಳಂತೆ ವರ್ತಿಸುತ್ತಿರುವ ನಿನ್ನಾ.. ಪರಿವಾರಕ್ಕೆ?
ಕಲ್ಲು ಮಣ್ಣಾದರೂ ಸಹ ಕಂಬನಿ ಮಿಡಿಯುತಿತ್ತು ನನ್ನೀ ಬವಣೆಯನ್ನು ಕೇಳಿ ಆದರೆ ನೀ ಅದಕ್ಕಿಂತಾ ಕಡೆಯಾದೆಯಲ್ಲಾ ಮನುಜಾ...
ಇನ್ನು ನಾ ಯಾರಲ್ಲಿ ಹೇಳಲಿ....? ನನ್ನೀ ಮನದ ವೇದನೆಯನ್ನಾ..? ಜೊತೆಗೆ.. ನಿನ್ನಂತಹಾ ಮನುಷ್ಯತ್ವವಿಲ್ಲದ ಮನುಷ್ಯರಿನ್ನೂ ಈ ಭೂಮಿಯ ಮೇಲೆ ಬದುಕಿದ್ದಾರೆಂಬ ಕಹಿ ಸತ್ಯವನ್ನಾ..?
ಯಾರಲ್ಲಿ ಹೇಳಲಿ ಎಂದು ನೀನೇ ಹೇಳು ಮನುಜಾ...? |
posted by ASHRAF @ 4:05 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
Post a Comment