ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಕಾಲದ ಅತೀ ಅಗತ್ಯದ ಬೇಡಿಕೆ. . . . . |
Wednesday, June 10, 2009 |
ಜಗತ್ತಿಂದು ಆಧುನಿಕತೆಯತ್ತ ನಾಗಲೋಟ ಕ್ಕೋಡುತ್ತಿರುವಾಗ.. ಇತರ ವರ್ಗಗಳಿಗಿಂತ ಎಷ್ಟೋ ಮೇಲ್ಪಟ್ಟ ಶ್ರೇಷ್ಟ ವರ್ಗದ ಮಾನವ ಕೂಡಾ.. ಭರದಿಂದ ಆಧುನಿಕತೆಯತ್ತ ದಾಪುಗಾಲಿಡುತ್ತಿದ್ದಾನೆ. ಜೊತೆಗೆ ಅಹಂಕಾರ, ಸ್ವಾರ್ಥ, ದುರಾಸೆ, ದುಷ್ಟ ಚಿಂತನೆಗಳಿಂದ, ಮಾನವ ಅಧಪತನಕ್ಕೆ ಜಾರುತ್ತಾ, ತನ್ನನ್ನು ಸೃಷ್ಟಿಸಿದ ಮೂಲ ಉದ್ದೇಶವನ್ನೇ ಮರೆತು..ಸೃಷ್ಟಿ ಕರ್ತನನ್ನೇ ಮರೆತು ಬಿಡುವಷ್ಟು ಅಪಾಯದ ಅಂಚಿನಲ್ಲಿ ಬಂದು ನಿಂತಿದ್ದಾನೆ. ಹಣ, ಆಸ್ತಿ, ಅಂತಸ್ತು, ಎಂದು ಶೇಖರಿಸಿಡುತ್ತಾ ತನ್ನೆಲ್ಲಾ ಅಮೂಲ್ಯ ಸಮಯವನ್ನು ಕೇವಲ ಈ ಇಹ ಜೀವನಕ್ಕೆ ಮಾತ್ರ ಮೀಸಲಿಟ್ಟಿದ್ದಾನೆ. ಈ ಜೀವನ ನಶ್ವರ ಎಂದು ಗೊತ್ತಿದ್ದು ಕೂಡಾ..ಮನುಷ್ಯ ಅದರ ಬೆನ್ನ ಹಿಂದೆಯೇ ಬಿದ್ದಿರುವುದು ಬಹಳ ಖೇದಕರ ಸಂಗತಿ.ಆದರೆ ಇಹ ಜೀವನಕ್ಕೆ ಬೇಕಾಗಿ ಎಂತಹಾ ಕ್ಲಿಷ್ಟಕರವಾದ ಸಾಹಸಕ್ಕೆ ಬೇಕಾದರೂ, ಮುಂದಾಗುವ ಮಾನವ, ಪರಲೋಕದ ಬಗ್ಗೆ ಅಜ್ಙಾನ ನಾಗಿರುವುದು. ಮನುಷ್ಯ ಸಮುದಾಯದ ಬಹಳ ದೊಡ್ಡ ದುರಂತವೇ ಸರಿ.ಈ ಶಾಶ್ವತವಲ್ಲದ ದುನ್ಯಾ ಕ್ಕಾಗಿ ಹರಸಾಹಸ ಪಟ್ಟು ಶೇಖರಿಸಿಡುವ ಮನುಷ್ಯ ತನ್ನ ಪರಲೋಕದ ಖಜಾನೆ ತುಂಬುವಲ್ಲಿ ಮಾತ್ರ ಎಡವಿ ಬಿದ್ದಿರುತ್ತಾನೆ. ಅಲ್ಲಾಹ್ ಹೇಳುತ್ತಾನೆ. ಸತ್ಯ ವಿಶ್ವಾಸಿಗಳೇ ಅಲ್ಲಾಹನನ್ನು ಭಯ ಪಡಿರಿ ಮತ್ತು ಪ್ರತೀ ಯೊಬ್ಬನು ತಾನು ನಾಳೆಗಾಗಿ ಏನನ್ನು ಸಿದ್ಧಪಡಿಸಿಟ್ಟುರು ವೆನೆಂಬುದನ್ನು ನೋಡಿ ಕೊಳ್ಳಲಿ, ಅಲ್ಲಾಹನನ್ನು ಭಯಪಡುತ್ತಲಿರಿ, ನಿಶ್ಚಯವಾಗಿಯೂ ನೀವು ಮಾಡುತ್ತಲಿರುವ ಸಕಲ ಕರ್ಮಗಳನ್ನು ಅಲ್ಲಾಹನು ಬಲ್ಲವನಾಗಿರುತ್ತಾನೆ. ಅಲ್ ಹಶ್ರ್-೧೮ ಇಂದು ಮುಸ್ಲಿಮರು ಎಲ್ಲಾ ರಂಗಗಳಿಲ್ಲಿಯೂ ಬಹಳಷ್ಟು ಹೊಡೆತ ತಿನ್ನುತ್ತಿದ್ದಾರೆ. ಕೊಲೆ, ಸುಲಿಗೆ, ಬಾಂಬ್ ಸ್ಪೋಟ, ಇಂತಹಾ ಯಾವುದೇ ಅಮಾನುಷ ಘಟನೆಯಲ್ಲಿಯೂ ಮುಸ್ಲಿಮರನ್ನೇ ಅಪರಾಧಿಗಳೆಂದು, ಭಯೋತ್ಪದಕರೆಂದೂ, ಚಿತ್ರೀಕರಿಸಲಾಗುತ್ತದೆ. ಇದಕ್ಕೆಲ್ಲಾ ಕಾರಣ ಮುಸ್ಲಿಮರೇ.. ಇಂದಿನ ಮುಸ್ಲಿಮರು ಕೇವಲ ನಾಮಧಾರಿ ಮುಸ್ಲಿಮರಾಗಿದ್ದಾರೆ. ಅವರಿಗೆ ಧರ್ಮವೆಂದರೇನು? ಧರ್ಮದ ತಿರುಳೇನು? ಅದರ ನೈಜತೆಯೇನು? ಎಂದು ತಿಳಿದಿಲ್ಲ, ಕುರ್ಆನಿನ ಬಗ್ಗೆ ಅರಿವಿಲ್ಲ.. ಹದೀಸಿನ ಕುರಿತು ಒಂಚೂರು ಜ್ಙಾನವಿಲ್ಲ...ಮೂಢ ನಂಬಿಕೆ ಅನಾಚಾರ ಗೊಡ್ಡು ಸಂಪ್ರದಾಯದಗಳಿಗೆ ಇಂದಿನ ಮುಸ್ಲಿಮರು ಹೆಚ್ಚಾಗಿ ಬಲಿ ಬೀಳುತ್ತಿದ್ದಾರೆ. ಹೀಗಾಗಿಯೇ ಇಂದಿನ ಮುಸ್ಲಿಮರು ಬಹಳಷ್ಟು ದೊಡ್ಡ ಹೊಡೆತ ತಿನ್ನಲು ಕಾರಣ.ಸುಮಾರು ೫೦೦ ವರ್ಷ ಗಳ ಮುಂಚೆ ಮುಸ್ಲಿಮೇತರಗಿಂತ ಮುಸ್ಲಿಮರು ಶೈಕ್ಷಣಿಕ ವ್ಯಾಪಾರ ವಿಜ್ಙಾನ ಭೋಧನಾ ರಂಗ ಹೀಗೆ ಎಲ್ಲದರಲ್ಲಿಯೂ ಬಹಳಷ್ಟು ಮುಂಚೂಣಿಯಲ್ಲಿದ್ದರು.ಯಾವೊಂದು ಸಮಸ್ಯೆಗೂ ಕುರ್ಆನ್ ಹದೀಸಿನ ಆಧಾರದಲ್ಲಿ ಪರಿಹಾರ ಕಂಡು ಕೊಳ್ಳುತ್ತಿದ್ದರು.ಆದರೆ ಈಗ ಮುಸ್ಲಿಮರಿಗಿಂತ ಮುಸ್ಲಿಮೇತರರು ಬಹಳ ಮುಂದಿದ್ದಾರೆ.ಮುಸ್ಲಿಮರ ಕೈಯಲ್ಲಿ ಕುರ್ಆನ್ ಹದೀಸ್ ಗಳೆಂಬ ಶಕ್ತವಾದ ಆಯುಧವಿದ್ದರೂ ಬಹಳಷ್ಟು ಹಿಂದುಳಿಯಲು ಕಾರಣ ಕುರ್ಆನಿನ ಪ್ರಯೋಜನ ಮುಸ್ಲಿಮರು ಪಡೆಯದಿರುತ್ತಿರುವುದು. ಅದರ ಕುರಿತು ಎಳ್ಳಷ್ಟೂ ಜ್ಙಾನ ವಿಲ್ಲದಿರುವುದು. ಹಿಜ್ರಾ ೧೦ನೇ ವರ್ಷದ ದುಲ್ ಹಜ್ಜ್ ೯ ನೇ ದಿನ ಮಕ್ಕಾದ ಅರಫಾ ಮೈದಾನದಲ್ಲಿ ಅಂತಿಮ ಪ್ರವಾದಿ ಮುಹಮ್ಮದ್ ಸ.ಅ ಹೇಳಿದ್ದರು.ಓ ಮನುಷ್ಯರೇ ...ನಾನು ಈ ವರ್ಷದ ನಂತರ ನಿಮ್ಮೊಂದಿಗೆ ಇರುವೆನೆಂದು ನನಗೆ ಗೊತ್ತಿಲ್ಲ ಆದುದರಿಂದ ನಾನು ಹೇಳುವುದನ್ನು ನೀವು ಬಹಳ ಜಾಗ್ರತೆಯಿಂದ ಗಮನವಿಟ್ಟು ಆಲಿಸಿರಿ.ಹಾಗೂ ಈ ನುಡಿಗಳನ್ನು ಇಲ್ಲಿ ಹಾಜರಿದ್ದವರು ಹಾಜರಿಲ್ಲ ದವರಿಗೆ ತಲುಪಿಸಿ. ಹಾಗೆಯೇ ಆ ಕರೆಗೆ ಓ ಗೊಟ್ಟು, ಅದರಂತೆ ನಮ್ಮ ಪೂರ್ವಜರು ಆ ದೀನನ್ನು ನಮಗೆ ತಲುಪಿಸಿದ್ದಾರೆ. ಆದರೆ ನಾವೋ ಪರಿಶೀಲನಾತ್ಮಕವಾಗಿ ನಮಗೆ ನಾವೇ ಆತ್ಮ ವಿಮರ್ಶೆ ಮಾಡಿ ನೋಡಿದರೆ ಅಲ್ಲಿ ಉತ್ತರ ಸಿಗುತ್ತಿಲ್ಲ.ಇಲ್ಲ ನಾವು ಹೀಗಾಗಬಾರದು, ನಾವು ಕಲಿತ ಒಂದು ಆಯತೋ, ಅಥವಾ ಒಂದು ಹದೀಸಾದರೂ ,ಇನ್ನೊಬ್ಬರಿಗೆ ಹೇಳಿ ಕೊಡುವ ಸದ್ಬುದ್ಧಿ ಬೆಳೆಸಬೇಕು. ಇಲ್ಲದಿದ್ದಲ್ಲಿ ಇಂದು ಸತ್ಯವನ್ನು ಉಳ್ಕೊಲ್ಲದ, ಇಸ್ಲಾಮ್ ಏನೆಂದು ಅರಿಯದ, ಅಲ್ಲಹನ ಬಗ್ಗೆ ತಿಳಿಯದ, ಮುಹಮ್ಮದ್ ನೆಬಿ{ಸ.ಅ} ರವರ ಪರಿಚಯವಿಲ್ಲದ, ನಮಗಿಂದು ಪರಿಚಯ ವಿರುವ ಪ್ರತೀಯೊಬ್ಬ ವ್ಯಕ್ತಿಯು, ನಾಳೆ ಮಹ್ಶರ ಮೈದಾನದಲ್ಲಿ ಅಲ್ಲಾಹನ ಮುಂದೆ ನಮ್ಮಲ್ಲಿಗೆ ಕೈ ತೋರಿಸಿ ಅಲ್ಲಾಹನೇ ಇವನ ಪರಿಚಯ ನನಗಿತ್ತು,ಆದರೆ ನಿನ್ನ ಬಗ್ಗೆ ಒಂದಿಷ್ಟೂ ಹೇಳಿ ಕೊಡದೆ ನನ್ನನ್ನು ವಿನಾಶದಂಚಿಗೆ ತಳ್ಳಲು ಸಹಾಯಕನಾದ ಇವನನ್ನೂ ನನ್ನ ತಾಣಕ್ಕೆ ಸೇರಿಸೆಂದು ತನ್ನೊಡನೆ ಎಳೆದೊಯ್ಯುವ ಆ ದುಸ್ಥಿತಿ ನಮಗೆ ಬರಬಾರದು.ನಮ್ಮಯ ನಾಳೆಯ ರಕ್ಷೆಗಾಗಿ ನಾವಿಷ್ಟಾದರೂ ಮಾಡದಿದ್ದರೆ, ನಾವು ಮುಸ್ಲಿಮರಾಗಿ ಏನು ಪ್ರಯೋಜನ, ಇಲ್ಲ ನಾವು ಬದಲಾಗಬೇಕು. ನಾವು ಮುಸ್ಲಿಮರೆಂಬ ಚಲನೆ ನಮ್ಮಲ್ಲುಂಟಾಗಬೇಕು, ಧರ್ಮ ವೆಂದರೇನು? ಧರ್ಮದ ನೀತಿ ನಿಯಮಗಳೇನು? ಧರ್ಮದ ನೈಜ ಉದ್ದೇಶವೇನೆಂದು? ಕುರ್ಆನ್ ಸುನ್ನತ್ತಿನ ಆಧಾರದಲ್ಲಿ ಅರಿವಿಲ್ಲದವರಿಗೆ ಇದನ್ನು ತಿಳಿಸಿ ಕೊಡಬೇಕು, ಅದಲ್ಲದೆ ಇಸ್ಲಾಮ್ ಸಾಹೋದರ್ಯತೆಗೆ ನೀಡಿದ ಮಹತ್ವ ಮನುಷ್ಯ ಜಗತ್ತಿಗೇ ಮಾದರಿಯಾದುದು. ಓರ್ವ ಇಲಾಹನಲ್ಲಿ ವಿಶ್ವಾಶವಿಟ್ಟು, ಒಂದು ಧರ್ಮವನ್ನು ಆಚರಿಸುತ್ತಾ, ಒಬ್ಬ ನಾಯಕರನ್ನು{ಮುಹಮ್ಮದ್ ನೆಬಿ ಸ. ಅ} ಅನುಸರಿಸುತ್ತಾ ಬದುಕುವ ಮುಸ್ಲಿಮರು ಒಂದು ಕುಟುಂಬದಂತೆ ವರ್ತಿಸಬೇಕೆಂದು, ಅವರೆಲ್ಲರೂ ಪರಸ್ಪರ ಸಹೋದರರೆಂದೂ ಇಸ್ಲಾಮ್ ಆದೇಶಿಸಿರುವುದನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿ ಕೊಡುವುದು ಅತೀ ಅಗತ್ಯವಾಗಿದೆ. ಇಲ್ಲದಿದ್ದಲ್ಲಿ ಮುಂದೊಂದು ದಿನ ಮುಸ್ಲಿಮರು ಅಧಪತನಕ್ಕೆ ತಳ್ಳಲ್ಪಡುವ ಅಥವಾ ನಿರ್ನಾಮ ವಾಗುವ ದಿನ ದೂರವಿಲ್ಲವೆಂದೆನಿಸುತ್ತದೆ.ಅದಕ್ಕಾಗಿ ಮುಸ್ಲಿಮರೆಲ್ಲರೂ ಹೆಚ್ಚು ಕ್ರಿಯಾಶೀಲರಾಗಿ, ಒಗ್ಗಟ್ಟಾಗಿ, ಇಸ್ಲಾಮಿನ ಆಶಯ, ಆದರ್ಶಗಳನ್ನು, ಮನುಷ್ಯ ಸಮುದಾಯಕ್ಕೆ ತಿಳಿಸಿ ಕೊಡಬೇಕಾದುದು ಕಾಲದ ಅತೀ ಅಗತ್ಯವಾದ ಬೇಡಿಕೆಯಾಗಿದೆ.
|
posted by ASHRAF @ 6:24 AM |
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
Post a Comment