ನೇರದಾರಿ

ಈ ಜೀವನ ಎಂಬ ಪ್ರಯಾಣದಲ್ಲಿ ನಾವು ಸಂಧಿಸುವ ವ್ಯಕ್ತಿಗಳು ಆಕಸ್ಮಿಕ,ಅಗಲಿಕೆ ಅನಿವಾರ್ಯ, ಹಾಗೆಯೇ ಅವರವರ ನಿಲ್ದಾಣ ಬಂದ ಕೂಡಲೇ ಇಳಿಯಲೇ ಬೇಕು.ಕೆಲವರು ದೀರ್ಘ ಪ್ರಯಾಣ ಮಾಡಬಹುದು.ಇನ್ನು ಕೆಲವರು ಸಮೀಪ ಪ್ರಯಾಣದಲ್ಲಿರಬಹುದು.ನಾವೀಗ ಈ ಪ್ರಯಾಣದ ಯಾವ ಸ್ಟೇಜ್ ನಲ್ಲಿದ್ದೇವೆಂದು ಬಲ್ಲವನು ಒಬ್ಬನೇ (ಅಲ್ಲಾಹ್)ಅವನೇ ನಮ್ಮೆಲ್ಲರ ಸರ್ವ ಪಾಲಕ.ಅವನಲ್ಲದೆ ಬೇರೆ ಆರಾಧ್ಯನಿಲ್ಲ.ಅಲ್ಲಾಹ್ ನಮ್ಮೆಲ್ಲರ ಕೊನೆಯ ಪಯಣವನ್ನು ಸುಗಮ ಗೊಳಿಸಿ, ನಮ್ಮೆಲ್ಲರನ್ನು ಜನ್ನತುಲ್ ಫಿರ್ದೌಸ್ ನಲ್ಲಿ ಒಂದು ಗೂಡಿಸಲಿ

 
>
  • ಹದೀಸ್ ಗ್ರಂಥಗಳಿಂದ
    ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್)
    ಸೂರಃ ಆಲು ಇಮ್ರಾನ್ 3:110
    ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ).
    ಇಣುಕಿ ಹೋದವರು

    satyasandesha
    ಈಗ ನೋಡುತ್ತಿರುವವರು
    ವೀಕ್ಷಣಾಗಾರರ ಸ್ಥಳ
    Locations of visitors to this page
    ಇಷ್ಟರವರೆಗೆ ಬರೆದದ್ದು
    ಕಬ್ ರ್ ಕೇಳಿದ್ದು.......
    Friday, July 17, 2009
    ಎಷ್ಟೆಷ್ಟು ಹಿರಿ ತಲೆಗಳು
    ತಾತ ಮುತ್ತಾತಂದಿರು
    ಬಂಧು ಬಳಗದವರು
    ಹೀಗೇ ಎಷ್ಟೊಂದು ವರ್ಗದವರು
    ನನ್ನೊಳಗೆ ಮರೆಯಾಗಿ ಮಣ್ಣಾಗಿ ಹೋಗಿಲ್ಲ.

    ಯಜಮಾನ-ಫಕೀರರು
    ಕಪ್ಪು- ಬಿಳುಪಿನವರು
    ಬಡವ-ಬಲ್ಲಿದರೂ
    ಸುಖ-ಸಂಪತ್ತು ಸೂರೆ ಗೊಂಡವರೂ
    ಇಂತಹಾ ಎಷ್ಟೆಷ್ಟು ಮಂದಿ
    ನನ್ನೊಳಗೆ ಅಡಕವಾಗಿಲ್ಲ.

    ನಾ ನನ್ನಿರವನ್ನು ಪ್ರತೀ
    ಕ್ಷಣವೂ ನಿನಗೆ ನೆನಪಿಸಿದರೂ
    ನೀ ನನ್ನ ಹತ್ತಿರದಿಂದಲೇ
    ಅದೆಷ್ಟು ಸಲ ಹಾದು ಹೋದರೂ..

    ಮತ್ತಷ್ಟು ನೀ ನನ್ನೊಡಲಿಗೆ
    ಸೇರಲಿರುವೆಯೆಂಬುವುದನ್ನು
    ಮರೆತಂತೆ ನಟಿಸಿ
    ಸುಖಾಡಂಬರದಲ್ಲಿ ತೇಲಿ
    ಹೋಗಿರುವೆಯೆಲ್ಲಾ..,

    ನಿನ್ನಿಂತಾ ಎದೆಗಾರಿಕೆಗೆ
    ಏನೆನ್ನಬೇಕು....?
    ಇದು ನಿನ್ನ ಮರೆಗುಳಿತನವೋ..
    ಯಾ../ ಗಟ್ಟಿತನವೋ..?
    posted by ASHRAF @ 8:37 AM  
    2 Comments:
    • At July 23, 2009 at 3:36 AM, Blogger ASHRAF said…

      helo

       
    • At July 23, 2009 at 5:24 AM, Blogger sunaath said…

      ಅಶ್ರಫ್,
      ಮೃತ್ಯುವನ್ನು ನಾವು ಕಾಣದಿದ್ದರೂ, ಮೃತ್ಯು ನಮ್ಮನ್ನು ನೋಡುತ್ತಲೇ ಇರುವದೆನ್ನುವ ಸತ್ಯವನ್ನು ಕಬ್ರದ ಪ್ರತೀಕದ ಮುಖಾಂತರ ಚೆನ್ನಾಗಿ ತಿಳಿಸಿದ್ದೀರಿ. ಒಳ್ಳೆಯ ಕವನ.

       

    Post a Comment

    << Home
     
    About Me

    Name: ASHRAF
    Home: India
    About Me: ಅಸ್ಸಲಾಮ್ ಅಲೈಕುಮ್
    See my complete profile
    Previous Post
    Archives
    ನಾ ಬರೆದದ್ದು
    Powered by

    BLOGGER

    Older Posts
    © 2005 ನೇರದಾರಿ Blogger Templates by Isnaini and Cool Cars Pictures