ಹದೀಸ್ ಗ್ರಂಥಗಳಿಂದ |
ಮುಆವಿಯಾ(ರ)ರಿಂದ ವರದಿ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಯಾರಿಗಾದರೂ ಒಳಿತನ್ನು ಬಯಸಿದರೆ ಅವನು ಆತನಿಗೆ ಧಾರ್ಮಿಕ ಜ್ಞಾನವನ್ನು ನೀಡುತ್ತಾನೆ. (ಬುಖಾರಿ ಮತ್ತು ಮುಸ್ಲಿಮ್) |
ಸೂರಃ ಆಲು ಇಮ್ರಾನ್ 3:110 |
ನೀವು (ನಾವು ಮುಸ್ಲಿಮರು) ಮನುಷ್ಯರಿಗಾಗಿ ಹೊರತರಲ್ಪಟ್ಟ ಉತ್ತಮ ಸಮುದಾಯವಾಗಿರುವಿರಿ. ಇಸ್ಲಾಮ್ ಆದೇಶಿಸಿದ ಎಲ್ಲವನ್ನೂ ನೀವು ಮಾಡುತ್ತೀರಿ ಮತ್ತು ಇಸ್ಲಾಮ್ ವಿರೋಧಿಸಿದ ಎಲ್ಲದರಿಂದಲೂ ನೀವು ದೂರವುಳಿಯುವಿರಿ. ಮತ್ತು ನೀವು ಅಲ್ಲಾಹನಲ್ಲಿ ವಿಶ್ವಾಸವಿರಿಸುವಿರಿ. ಗ್ರಂಥ ನೀಡಲ್ಪಟ್ಟ ಜನರು (ಯಹೂದ ಮತ್ತು ಕ್ರೈಸ್ತರು) ವಿಶ್ವಾಸವಿರಿಸುತ್ತಿದ್ದರೆ, ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಕೆಲವರಿಗೆ ವಿಶ್ವಾಸವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಫಾಸಿಕೂನ್ (ಅಲ್ಲಾಹನಿಗೆ ಅವಿಧೇಯರೂ, ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸುವವರೂ ಆಗಿದ್ದಾರೆ). |
ಇಣುಕಿ ಹೋದವರು |
satyasandesha |
>
ಈಗ ನೋಡುತ್ತಿರುವವರು |
|
ವೀಕ್ಷಣಾಗಾರರ ಸ್ಥಳ |
|
ಇಷ್ಟರವರೆಗೆ ಬರೆದದ್ದು |
|
ಬದುಕಿನ ತಿರುವುಗಳು ಬಹಳಷ್ಟು ವಿಸ್ಮಯ |
Monday, June 8, 2009 |
ಬದುಕು ಅದೆಂತೆಂತಹ ಪಾಠಗಳನ್ನು ಕಲಿಸಿ ಕೊಟ್ಟಿಲ್ಲ,ಈ ಬದುಕು ಸಾಕೆನಿಸುವಷ್ಟು ,ಇನ್ನು ಈ ಭೂಮಿಯಲ್ಲಿ ಬದುಕಲಾರೆನಿಸುವಷ್ಟು, ಬದುಕಿನ ಪ್ರತೀಯೊಂದು ಮಜಲುಗಳು, ಪ್ರತೀಯೊಂದು ತಿರುವುಗಳು, ಬಹಳಷ್ಟು ವಿಸ್ಮಯಕಾರಿ ನಂಬಿಕೆಯೇ ಬರದಷ್ಟು ಪಾಠವನ್ನು ಕಲಿಸಿ ಕೊಟ್ಟಿದೆ. ಹಸಿವೆಂದರೇನೆಂದು ಗೊತ್ತಿಲ್ಲದಿದ್ದಾಗ, ಹಸಿವಿನ ರುಚಿಯನ್ನು, ಕುಟುಂಬವಿಲ್ಲದೆ ಏಕಾಂಗಿಯಾಗಿ ಜೀವಿಸುವುದು ಅಸಾಧ್ಯವೆಂದೆನಿಸಿದಾಗ ಕಬ್ರಿನ ಒಂಟಿತನವನ್ನು, ಮನೆ ಮಠವೇನೂ ಇಲ್ಲದೆ, ಗೊತ್ತು ಗುರಿಯಿಲ್ಲದೆ ಪಯಣಿಸಿದಾಗ ಮರಣದ ನೆನಪನ್ನು, ಒಲೆಯುರಿಸಲು ಏನೇನು ಇಲ್ಲದೆ ಹೋಟೆಲೂಟಕ್ಕೆ ಶರಣು ಹೊಡೆದು, ಹೋಟೆಲೂಟ ಅತ್ತ ಉಗುಳಲೂ ಆಗದೆ, ನುಂಗಲೂ ಆಗದೆ, ಕಣ್ಣಲ್ಲಿ ಕಂಬನಿ ಉಕ್ಕಿ ಹರಿದಾಗ, ಹೊಟ್ಟೆಗೆ ಹಿಟ್ಟಿಲ್ಲದೆ ಹಪ ಹಪಿಸುತ್ತಿರುವವರ ಪಾಡನ್ನು, ಹುಟ್ಟಿಧಾರಭ್ಯ ಅನುಕ್ರಮವಾಗಿ ಪಾಲಿಸುತ್ತಿದ್ದ ಜೀವನ ಕ್ರಮ ಒಮ್ಮೆಲೇ ತಿರುಗು ಮುರುಗಾಗಿ, ಮಾನಸಿಕವು ಶಾರೀರಿಕವು, ಬೆಂದು ಬಸವಳಿಯ ತೊಡಗಿದಾಗ, ನಮಗಿಂತಲೂ ವ್ಯಥೆಯಿಂದ ಬಳಳುತ್ತಿರುವವರನ್ನು, ಹೀಗೆ ಬದುಕು ಬಹಳಷ್ಟು ರೋಚಕ ಘಟನೆಯನ್ನು ಕಾಣಿಸಿ ಕೊಟ್ಟಿದೆ.
ನಾವು ಬದುಕಿನ ಪ್ರತೀಯೊಂದು ಘಟ್ಟದಲ್ಲೂ ಒಂದು ಒಳ್ಳೆಯ ಪಾಠವನ್ನು ಕಲಿಯುತ್ತೇವೆ. ಆದರೆ ವಿಪರ್ಯಾಸವೆಂದರೆ, ಬದುಕಿನ ಪ್ರತೀ ಮಜಲುಗಳಲ್ಲಿಯೂ ಕಲಿತ ಪಾಠ ಬಹಳಷ್ಟು ಬೇಗನೆ ಮರೆತು ಬಿಡುತ್ತೇವೆ. ಈ ಬದುಕೇ ಹೀಗೆ ನಮಗೆ ಇನ್ನು ಸಹಿಸಲು ಸಾಧ್ಯವೇ ಇಲ್ಲ ವೆಂಬಷ್ಟು ಕಷ್ಟಗಳು ಬರುತ್ತವೆ. ಇನ್ನು ಯಾವ ದಾರಿಯೂ ಇಲ್ಲ, ಎತ್ತ ನೋಡಿದರೂ ಬರೀ ಕತ್ತಲು ವೆಂಬನಿಸುವಷ್ಟು,ಆದರೆ ಇದೆಲ್ಲ ಇಹ ಜೀವನದಲ್ಲಿ ಕೇವಲ ಪರೀಕ್ಷೆ ಮಾತ್ರ, ಪರಲೋಕದ ಜೀವನದಲ್ಲಿನ ನಮ್ಮ ಅಂಕ ಪಟ್ಟಿಯಲ್ಲಿ ಬಹಳಷ್ಟು ಅಂಕವನ್ನು ಪಡೆಯಲು ನಮಗಿರುವ ಅದೃಷ್ಟ ಎಂದು ಕೊಂಡರೆ ಸಾಕು.
ಅಲ್ಲಾಹ್ ಕೆಲವರಿಗೆ ಎಲ್ಲವನ್ನೂ ಕೊಟ್ಟು ಪರೀಕ್ಷಿಸುತ್ತಾನೆ. ಮತ್ತೆ ಕೆಲವರಿಗೆ ಏನನ್ನೂ ಕೊಡದೆಯೂ ಪರೀಕ್ಷಿಸುತ್ತಾನೆ. ಕೆಲವರಿಗೆ ಬೇಕಾದಷ್ಟು ಸಂಪತ್ತನ್ನು ಕೊಟ್ಟು, ಇನ್ನಲವರಿಗೆ ಮೇಲಿಂದಮೇಲೆ ಸೋಲಿನ ರುಚಿಯನ್ನು ತೋರಿಸಿ, ಮತ್ತಲವರಿಗೆ ಸಹಿಸಲಾರದಷ್ಟು ವ್ಯಥೆಯನ್ನು ಕೊಟ್ಟು, ಹೀಗೆಯೇ ಆತನ ಪರೀಕ್ಷೆ . ತನ್ನ ದಾಸರ ವಿಶ್ವಾಸವನ್ನು ಪರೀಕ್ಷಿಸಲು, ಮುಂದುವರಿಯುತ್ತದೆ . . . ;ಇದರಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಇಹದಲ್ಲೂ ಪರದಲ್ಲೂ ಯಶಸ್ವಿಯಾಗುತ್ತರೆ. ಇದರಲ್ಲಿ ಯಾರು ಸೋಲುತ್ತಾರೋ ಅವರು ಎರಡು ಕಡೆಯೂ ಸೋಲಿನ ರುಚಿ ಅನುಭವಿಸಬೇಕಾಗುತ್ತದೆ.
ಬದುಕು ಒಂದು ಅದೃಷ್ಟ ವೆಂದು ಕೊಂಡವರಿದ್ದಾರೆ, ಬದುಕು ದುರಾದೃಷ್ಟ ವೆಂದು ಕೊಂಡವರೂ ಇದ್ದಾರೆ. ಕೆಲವರು ಉನ್ನಲಾಗದೆ ರೆ. ಮತ್ತೆ ಕೆಲವರು ಬದುಕಲಾಗದೆ ಉನ್ನುತ್ತಿದ್ದಾರೆ. ಕೆಲವರು ಹಸಿವಿಲ್ಲದೆ ಒದ್ದಾಡುತ್ತಿದ್ದರೆ ಮತ್ತೆ ಕೆಲವರು ಹಸಿವಿನಿಂದ ಒದ್ದಾಡುತ್ತಿದ್ದರೆ, ಬದುಕೆಂದರೆ ಇದೇ..
ಈ ಬದುಕೇ ಹೀಗೆ , ನಮಗೆ ಬೇಕೆಂದೆನಿಸಿದಾಗ ಬರುವುದಿಲ್ಲ, ಬೇಡವೆನಿಸಿದಾಗ ಹೊಗುವುದೂ ಇಲ್ಲ, ನಾವೇ ಬದುಕಿನ ರಥಗಳನ್ನು ಸಹನೆ ಹಾಗೂ ಸ್ಥೈರ್ಯದಿಂದ ಎಳೆದು ಕೊಂಡು ಹೋಗಲು ಪ್ರಯತ್ನಿಸಬೇಕು. ಕಷ್ಟ, ನಷ್ಟ, ಸೋಲು, ಗೆಲುವು ಗಳೇನೆ ಇದ್ದರೂ ಎಲ್ಲವನ್ನೂ ಸಮ ಚಿತ್ತದಿಂದ ಎದುರಿಸುವ ಮನೋಭಾವ ನಮ್ಮಲ್ಲಿರಬೇಕು.
ಅದಲ್ಲದೆ ನಾವು ಬದುಕನ್ನು ಬಹಳಷ್ಟು ಸಿಂಪಲ್ಲಾಗಿ ತೆಗೆದು ಕೊಳ್ಳಬೇಕು. ಇಹ ಜೀವನದ ಯಾವುದೇ ಆಸೆ ಆಕಾಂಕ್ಷೆ ಗಳಿಗೆ ಒತ್ತು ಕೊಡದೆ, ಪರಲೋಕದ ಜೀವನಕ್ಕಾಗಿ ನಮ್ಮ ಈ ಇಹ ಜೀವನವನ್ನು ಮುಡಿಪಾಡಿಗಿಡಬೇಕು, ಆಗ ಮಾತ್ರ ಸುಂಧರ ಸುಮಧುರ ಬದುಕು ನಮಗೆ ದಕ್ಕೀತು. ಇಲ್ಲದಿದ್ದ್ರೆ ಈ ಸ್ವಾರ್ಥಮಯ ಯುಗದಲ್ಲಿ ಬದುಕಲು ಖಂಡಿತಾ ಸಾಧ್ಯವಿಲ್ಲ.
ಈ ಬದುಕು ಎಷ್ಟು ಸತ್ಯವೋ ಮರಣ ಕೂಡ ಅಷ್ಟೇ ಸತ್ಯ, ಖಬ್ರಿನ ನೆನಪು, ಮರಣದ ನೆನಪು,ಮಹ್ಶರದ ನೆನಪು. ನಮ್ಮ ಮನದಲ್ಲಿ ಯಾವಾಗಲೂ ಇರಲೇ ಬೇಕಾದ ಸಂಗತಿಗಳಿವು. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಜೀವನ ನಡೆಸಲು ಪ್ರಯತ್ನಿಸಬೇಕು. ಬದುಕಿನಲ್ಲಿ ಯಾವಾಗಲೂ ಕತ್ತಲಿರಲು ಸಾಧ್ಯವಿಲ್ಲ. ಒಂದಿಲ್ಲೊಂದು ದಿನ ಬೆಳಕು ಬರಲೂ ಬಹುದು. ಇಲ್ಲದಿದ್ದರೆ ಈ ಜೀವನದ ಕತ್ತಲು, ಆ ಪಾರತ್ರಿಕ ಲೋಕದ ಬೆಳಕಿಗೆ ನಾಂದಿ ಯಾಗಲಿರುವ ದಾರಿ ಎಂದೆನಿಸಿ ಕೊಳ್ಳಬೇಕು.
ನಾವು ಯಾರಿಗಾಗಿ ಬದುಕಬೇಕು? ಯಾತಕ್ಕಾಗಿ ಬದುಕಬೇಕು. ಎಂಬುವುದು ಪ್ರತೀ ಕ್ಷಣವು ಚಿಂತಿಸಲೇ ಬೇಕಾದ ವಿಷಯ, ನಾವು ಯಾರಿಗಾಗಿಯೂ ಬದುಕಬೇಕಿಲ್ಲ. ನಮ್ಮನ್ನು ದೇವ ಸುಮ್ಮನೆ ಸೃಷ್ಟಿಸಿಲ್ಲ. ಸೃಷ್ಟಿಯ ಯೋಜನೆ ಮಾಡುವವನೂ ಅದನ್ನು ಜಾರಿಗೊಳಿಸುವವನೂ, ಅದರಂತೆ ರೂಪ ಕೊಡುವವನೂ , ಅಲ್ಲಾಹನೇ.., ಅವನಿಗೆ ಅತ್ಯುತ್ತಮ ನಾಮಗಳಿವೆ. ಭೂಮಿ ಆಕಾಶಗಳಲ್ಲಿರುವ ಪ್ರತೀಯೊಂದು ವಸ್ತುವೂ ಅವನನ್ನು ಜಪಿಸುತ್ತಿದೆ. ಮತ್ತು ಅವನು ಪ್ರಬಲನೂ ಯುಕ್ತಿ ಪೂರ್ಣನೂ ಆಗಿರುತ್ತಾನೆ. {ಅಲ್ ಹಶ್ರ್-೨೪} ನಮ್ಮ ಜನನ ಮರಣ ಹಾಗೂ ಅದರೊಳಗಿನ ಜೀವನ ಎಲ್ಲ ಎಲ್ಲವೂ ಅಲ್ಲಾಹನಿಗೇ ಸಮರ್ಪಿತವಾಗಬೇಕು.
ಅದಲ್ಲದೆ ಹghi ತ್ ಆಯಿಶಾ, ಫ಼ಾತಿಮಾ, ಆಸಿಯಾ, ಸುಮಯ್ಯ,[ರ.ಅ] ಮುಂತಾದವರುಗಳ ಆಶಯ, ಬದುಕಿನ ಪ್ರತೀ ಘಟ್ಟದಲ್ಲೂ ಅವರು ತೋರಿದ ಸಹನೆ , ಅವರ ತ್ಯಾಗ್ಯೋಜ್ವಲ ಜೀವನ ಚರಿತ್ರೆ ನಮಗೆ ಮಾದರಿಯಾಗ ಬೇಕು. ಆಗ ಮಾತ್ರ ಸುಖ ಸಮೃದ್ಧದ ನೆಮ್ಮದಿಯುತವಾದ ಬದುಕು ನಮ್ಮದಾಗಲು ಸಾಧ್ಯ. ಅಂತಹಾ ಬದುಕು ನಮ್ಮದಾಗಲು ನಾವು ಪ್ರಯತ್ನಿಸೋಣ. ಅದಕ್ಕಾಗಿ ಅಲ್ಲಾಹನಲ್ಲಿ ಪ್ರಾರ್ಥಿಸೋಣ. |
posted by ASHRAF @ 5:09 AM |
|
1 Comments: |
-
Dear Sis.....
It's a nice experience to read ur creations...How beautiful ur words...!!!
I wonder how nice the hands behind this words and its owner will be..!!!
|
|
<< Home |
|
|
|
|
About Me |
Name: ASHRAF
Home: India
About Me: ಅಸ್ಸಲಾಮ್ ಅಲೈಕುಮ್
See my complete profile
|
Previous Post |
|
Archives |
|
ನಾ ಬರೆದದ್ದು |
|
|
|
|
|
|
|
|
|
|
|
|
|
|
|
|
|
|
|
|
Powered by |
|
|
Dear Sis.....
It's a nice experience to read ur creations...How beautiful ur words...!!!
I wonder how nice the hands behind this words and its owner will be..!!!